ಸುದ್ದಿ ವಿವರ

ರಶೀದಿ ಪುಸ್ತಕ ಬಿಡುಗಡೆ

post

ದಿನಾಂಕ27/03/2021 ಶನಿವಾರ ಕಡಿಯಾಳಿ ಶ್ರೀಮಹಿಷಮರ್ದಿನಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಸಭೆ ಜೀರ್ಣೋದ್ಧಾರ ಸಮಿತಿಯ ಮಾನ್ಯ ಅಧ್ಯಕ್ಷರಾದ ಶ್ರೀ ನಾಗೇಶ ಹೆಗ್ಡೆ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಭೆಯಲ್ಲಿ ಜೀರ್ಣೋದ್ಧಾರದ ರಶೀದಿ ಪುಸ್ತಕವನ್ನು(Recipt Book) ಬಿಡುಗಡೆಗೊಳಿಸಲಾಯಿತು. ಜೀರ್ಣೋದ್ಧಾರಕ್ಕೆ ಶ್ರೀಮತಿ ಶಾಂತ ವಿ ಆಚಾರ್ಯ ನೀಡಿದ ಧನಸಹಾಯದ ರಸೀದಿಯನ್ನು ದೇವಸ್ಥಾನದ ವ್ಯವಸ್ಥಾಪನ ಮಂಡಳಿ ಅಧ್ಯಕ್ಷ ಡಾ. ರವಿರಾಜ ಆಚಾರ್ಯ ರು ಪಡೆಯುವ ಮೂಲಕ ಚಾಲನೆ ನೀಡಲಾಯಿತು. ಶ್ರೀ ದೇವಸ್ಥಾನದ ವಾಸ್ತು ತಜ್ಞರಾದ ಗುಂಡಿಬೈಲು ವಿದ್ವಾನ್ ಸುಬ್ರಹ್ಮಣ್ಯ ಭಟ್ ದೇವಸ್ಥಾನದ ನೂತನ ಸುತ್ತುಪೌಳಿಯ ಪ್ಲಾನ್ ಮತ್ತು ಎಲಿವೇಶನ್ ಬಗ್ಗೆ ಮಾರ್ಗದರ್ಶನ ನೀಡಿದರು. ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷರಾದ ಕುಂಜಿತ್ತಾಯ ಶ್ರೀನಿವಾಸ್ ಉಪಾಧ್ಯಾಯ, ಭಾಸ್ಕರ್ ಸೇರಿಗಾರ್, ರಮೇಶ್ ಸೇರಿಗಾರ್, ನಾಗರಾಜಶೆಟ್ಟಿ ಕಡಿಯಾಳಿ, ಶ್ರೀಮತಿ ಪದ್ಮ ರತ್ನಾಕರ್, ಶ್ರೀಮತಿ ಭಾರತಿ ಚಂದ್ರಶೇಖರ್, ಸತೀಶ್ ಭಾಗವತ್ ಉಪಸ್ಥಿತರಿದ್ದರು.ಜೀರ್ಣೋದ್ದಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ .ರಾಘವೇಂದ್ರ ಕಿಣಿ ಕಾರ್ಯಕ್ರಮ ನಿರ್ವಹಿಸಿ ಸತೀಷ್ ಕುಲಾಲ್ ಕಡಿಯಾಳಿ ವಂದಿಸಿದರು.