ಸುದ್ದಿ ವಿವರ

ಕಡಿಯಾಳಿ ದೇಗುಲ: ನೂತನ ವೆಬ್‌ಸೈಟ್ ಅನಾವರಣ

post

ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನ ಜೀರ್ಣೋದ್ಧಾರಗೊಳ್ಳುತ್ತಿರುವ ಸಂದರ್ಭ ನೂತನವಾಗಿ ಅಭಿವೃದ್ಧಿಪಡಿಸಿದ ವೆಬ್‌ಸೈಟ್ ನ್ನು (https://kadiyalisrimahishamardinitempledevelopmentcommittee.com) 23/02/2022 ಬುಧವಾರ ದೇವಸ್ಥಾನದ ವ್ಯವಸ್ಥಾಪನ ಮಂಡಳಿ ಅಧ್ಯಕ್ಷ ಡಾ| ರವಿರಾಜ ವಿ. ಆಚಾರ್ಯ ಮತ್ತು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ನಾಗೇಶ್ ಹೆಗ್ಡೆ ಲೋಕಾರ್ಪಣೆಗೊಳಿಸಿದರು. ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಕಿಣಿ, ಪವಿತ್ರಪಾಣಿ ಪ್ರೊ| ಶ್ರೀನಿವಾಸ ಉಪಾಧ್ಯಾಯ, ಸರದಿ ಅರ್ಚಕ ರಾಧಾಕೃಷ್ಣ ಉಪಾಧ್ಯಾಯ, ಉಡುಪಿ ವೆಬ್ ಸೊಲ್ಯುಶನ್ ಮುಖ್ಯಸ್ಥೆ ಶ್ರೀನಿಧಿ ಆಚಾರ್ಯ ಉಪಸ್ಥಿತರಿದ್ದರು.