ಸುದ್ದಿ ವಿವರ

ಕರಸೇವೆ

post

ಇಂದು ದಿನಾಂಕ 24/09/2021 ರ ಶುಕ್ರವಾರ ಜೀರ್ಣೋದ್ಧಾರ ಗೊಳ್ಳುತ್ತಿರುವ ಉಡುಪಿ ಕಡಿಯಾಳಿ ಶ್ರೀಮಹಿಷಮರ್ದಿನಿ ದೇವಸ್ಥಾನದ ಕರಸೇವೆಗೆ ಕೇಂದ್ರದ ಕೃಷಿ ಮತ್ತು ರೈತರ ಕಲ್ಯಾಣ ಸಚಿವರಾದ ಶೋಭಾ ಕರಂದ್ಲಾಜೆ ಸ್ವತಹ ಭಾಗವಹಿಸಿ ಕರಸೇವೆ ನಡೆಸಿದರು ನೆರೆದಿದ್ದ ಕರ ಸೇವಕರೊಂದಿಗೆ ಸಚಿವರು ಬೆರೆತು ಹಾರೆ ಹಿಡಿದು ಬುಟ್ಟಿಗೆ ಮಣ್ಣು ತುಂಬಿಸಿದರು. ಮತ್ತು ಸ್ವತಹ ಸಾಮಾನ್ಯ ಸ್ವಯಂ ಸೇವಕರಂತೆ ಒಂದು ತಾಸುಗಳ ಕಾಲ ಜಗನ್ಮಾತೆ ಮಹಿಷಮರ್ದಿನಿ ಯ ಸೇವೆ ನಡೆಸಿದರು. ಈ ಸಂದರ್ಭದಲ್ಲಿ ಜೀರ್ಣೋದ್ದಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ ರಾಘವೇಂದ್ರ ಕಿಣಿ, ಉಡುಪಿ ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ಗಿರೀಶ ಅಂಚನ್, ನಗರಸಭಾ ಸದಸ್ಯರಾದ ರಜನಿ ಹೆಬ್ಬಾರ್, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರಾದ ಮೋಹನ್ ಉಪಾಧ್ಯಾಯ, ಶ್ರೀಮತಿ ಶಿಲ್ಪಾ ರಘುಪತಿ ಭಟ್, ದೇವಸ್ಥಾನದ ವ್ಯವಸ್ಥಾಪನ ಮಂಡಳಿಯ ಸದಸ್ಯರು, ಜೀರ್ಣೋದ್ಧಾರ ಸಮಿತಿಯ ಸದಸ್ಯರು, ಅರ್ಚಕರು ಕಾರ್ಯನಿರ್ವಹಣಾಧಿಕಾರಿ ಸಿಬ್ಬಂದಿಗಳು ಸಮಸ್ತ ಗ್ರಾಮಸ್ಥರು, ನೂರಾರು ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.